ವಾಲ್ಮೀಕಿ ರಾಮಾಯಣದಲ್ಲಿ ನಾಟ್ಯ, ಸಂಗೀತದ ಪರಿಭಾಷೆಗಳ ಸಂಕಲನ- ಅರಣ್ಯ ಕಾಂಡ

Abstract

ರಾಮಾಯಣವೆಂಬ ಆದಿಕಾವ್ಯ ಪ್ರಪಂಚಕ್ಕೆ ಕೊಟ್ಟ ಮಾರ್ಗ, ಸಂದೇಶ, ಗಮ್ಯ ಬಹಳ ದೊಡ್ಡದು,. ಅದನ್ನು ಯಥಾಸಾಧ್ಯ ಬಗೆಬಗೆಯಾಗಿ ಅನೇಕ ಸಂಗೀತ ನಾಟ್ಯಗಳೂ ಅನುಕರಿಸುತ್ತಲೇ ಬಂದಿವೆ. ಇಂಥ ರಾಮಾಯಣ ಕಾವ್ಯದೊಳಗೆ ಸಂಗೀತ ನಾಟ್ಯವು ಹೇಗಿದೆ? ಯಾವ ಬಗೆಯ ಪರಿಭಾಷೆಗಳು ದೊರೆಯುತ್ತವೆ? ಯಾವ ರೀತಿ ವ್ಯಾಖ್ಯಾನಿಸಬೇಕು- ಎಂಬ ಕುರಿತಾದ ಶೋಧಲೇಖನ ಸರಣಿ ವಿದುಷಿ ಕಾಂಚನ ರೋಹಿಣೀ ಸುಬ್ಬರತ್ನಂ ಅವರು ಬರೆಯುತ್ತಿರುವ ಈ ಭರತಕೌತುಕ ಅಂಕಣದಲ್ಲಿದೆ. ಈ ಸಲದ ಸಂಚಿಕೆಯಲ್ಲಿ ಅರಣ್ಯ ಕಾಂಡದಲ್ಲಿ ಲಭ್ಯವಾಗುವ ಸಂಗೀತ-ನಾಟ್ಯ ಪರಿಭಾಷೆಗಳನ್ನು ಕಾಣಬಹುದು. ಅದರಲ್ಲೂ ಪ್ರಾಚೀನ ಪೌರಾಣಿಕ ಇತಿಹಾಸಗಳಲ್ಲಿರುವ ಗಂಧರ್ವ, ಪೌಲಸ್ತ್ಯ ಮೊದಲಾದವರನ್ನು ಗೀತ-ನೃತ್ಯದ ಯಾವ್ಯಾವ ಗ್ರಂಥದ ಪರಿಭಾಷೆಗಳಿಗೆ ಜೊತೆಯಾಗಿ ಕಾಣಬಹುದೆಂದೂ ವಿವರಿಸಲಾಗಿದೆ. ಸುಮಾರು 17 ಪುಟಗಳ ಕುತೂಹಲಕಾರಿ ಶೋಧಲೇಖನವಿದು.