ರಾಮನೆಂಬ ಕಲೆಯ ಹೊಕ್ಕುಳಬಳ್ಳಿ

Abstract

ರಾಮಮೂಲವಾದ ಭಾರತೀಯ ಸಂಜಾತ ಕಲೆಗಳ ವಿಶ್ಲೇಷಣೆ, ಆಚರಣೆ ಮತ್ತು ವಿಸ್ತಾರವನ್ನು ಕುರಿತಾದ ಈ ಲೇಖನದಲ್ಲಿ ನೃತ್ಯಾಸಕ್ತರಿಗೆ ಅನುವಾಗುವಂತ ನಾಯಕಭಾವದ ಭರತನಿರೀಕ್ಷೆಯೆಂಬ ಪದವರ್ಣದ ಸಾಹಿತ್ಯವೂ ಇದೆ. ಅಯೋಧ್ಯೆ ರಾಮನಿಗೆ ದಕ್ಕಿದ ಕಲಿಯುಗದ ವಿಧಿವಿಪರ್ಯಾಸದ ಹಿನ್ನೆಲೆಯಲ್ಲಿ ಈ ಲೇಖನದ ಭಾಗಶಃ ಅಂಶವು ಹೊಸದಿಗಂತ ಪತ್ರಿಕೆಯ ಬೃಹತ್ ೩೨ಪುಟಗಳ ಸಂಚಿಕೆಯಲ್ಲಿಯೂ ಪ್ರಕಟಗೊಂಡು ನಾಡಿನೆಲ್ಲೆಡೆ ಮನ್ನಣೆಗೆ ಪಾತ್ರವಾಗಿದೆ. ಈ ಲೇಖನ ಪೂರ್ಣರೂಪದಲ್ಲಿ ನೂಪುರ ಭ್ರಮರಿ ಸಂಶೋಢನ ವೇದಿಕೆಯಲ್ಲಿ ಈ ಮಾಸಿಕದ ಆವೃತ್ತಿಯ ಪ್ರಧಾನ ಸಂಭ್ರಮ ಲೇಖನವಾಗಿ ಬೆಳಕು ಕಾಣುತ್ತಿದೆ.