An in-detail analysis on Parakīyā nāyikā

Parakīyā is the nāyikā who does not belong to the nāyaka. This division, parakīyā is not mentioned by Bharata in Nāṭyaśāstra. Infidelity by a lady towards her man was considered as one of the pañcamahāpāpam-s yet today she is considered as the highest form of devotion. This paper will deal with the transition along with the earliest mention of this nāyikā in texts and important events in history which lead to the change. Dealing with the practical aspects of the nāyikā, songs of different genres by famous poets is dealt with. The cause of rasābhāsa and bhāvābhāsa as stated by alaṃkārikās is adapted to this nāyikā and the activities which can be incorporated and the ones to be avoided while choreographing is also dealt with. Examples of a parakīyā nāyikā from alṃkāraśāstra is analysed to conclude an apt portrayal of this nāyikā.

ಜಾಯನನ ನೃತ್ತರತ್ನಾವಳೀ-ಭಾಗ ೫- ಸಾತ್ವಿಕ ಲಕ್ಷಣ ( ಪಾರಿಭಾಷಿಕ ಅರ್ಥಗಳ ವಿಸ್ತೃತ ವಿವೇಚನೆ ಸಹಿತ)

ಕರ್ನಾಟಕ ಕಾಣುತ್ತಿರುವ ಅತ್ಯುತ್ತಮ, ಹಿರಿಯ ತಲೆಮಾರಿನ ಸಂಶೋಧಕರಲ್ಲಿ ಡಾ. ಶೇಷ ಶಾಸ್ತ್ರಿ ಅವರದ್ದು ಮೇಲ್ಪಂಕ್ತಿಯಲ್ಲಿರುವ ಹೆಸರು. ಅವರ ಸಂಶೋಧನಾ ಕೃತಿ ‘ಕರ್ನಾಟಕದ ವೀರಗಲ್ಲುಗಳು’ ಶೋಧsಕ್ಷೇತ್ರಕ್ಕೆ ಮಹತ್ವದ ಸೇರ್ಪಡೆ. ಅದೂ ತನ್ನ ೩ನೇ ಆವೃತ್ತಿಯನ್ನು ಪ್ರಸಕ್ತ ಸಾಲಿನಲ್ಲಿ ಕಾಣುತ್ತಿರುವುದು ಸಂಶೋಧನಾ ಕ್ಷೇತ್ರಕ್ಕೆ ಹೆಮ್ಮೆಯ ವಿಷಯ. ಸಂಶೋಧನೆಯೊಂದು ಮರುಪ್ರಕಟಣೆಗೊಳ್ಳುವಷ್ಟು ಅರ್ಹತೆ, ಜನಾದರ ಹೊಂದಿರುವುದಾದರೆ ಹೇಗೆ ಎನ್ನುವುದಕ್ಕೆ ಅವರ ಶೋಧಲೇಖನ ಮತ್ತು ಕೃತಿಗಳೇ ಸಾಕ್ಷಿ. ನೂಪುರ ಭ್ರಮರಿ ಆಯೋಜಿಸಿದ ಕರ್ನಾಟಕ ರಾಜ್ಯಮಟ್ಟದ ನೃತ್ಯಸಂಶೋಧನಾ ವಿಚಾರಸಂಕಿರಣದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಹಲವು ನಿರ್ದೇಶನಗಳನ್ನಿತ್ತವರು ಇವರೇ- ಡಾ. ಶೇಷಶಾಸ್ತ್ರಿ. ಅವರ ಅಧ್ಯಕ್ಷೀಯ ನುಡಿಗಳು ‘ನೂಪುರಾಗಮ’ದಲ್ಲಿ ಸವಿಸ್ತಾರವಾಗಿ ದಾಖಲಾಗಿವೆ ಕೂಡಾ. ನೂಪುರ ಭ್ರಮರಿಯೊಂದಿಗಿನ ನಂಟು, ಅದರ ಸದಸ್ಯರೊಂದಿಗಿನ ಒಡನಾಟ- ಪ್ರೀತಿಗೆ ನಾವು ಅವರಿಗೆ ಸದಾಕಾಲಕ್ಕೂ ಋಣಿ. ಇನ್ನೇನು ಸದ್ಯದಲ್ಲೇ ಅವರಿಗೆ ಅಭಿನಂದನಾ ಸಮಾರಂಭವೂ ಅಭಿಮಾನಿ ಇತಿಹಾಸಕಾರರಿಂದ ನೆರವೇರಲಿಕ್ಕಿದೆ.ತೆಲುಗು ಸಾಹಿತ್ಯ-ಸಂಶೋಧನೆ- ಶಾಸನಾಧ್ಯಯನದಲ್ಲಿಯೂ ಶಾಸ್ತ್ರಿಗಳ ಕೊಡುಗೆ ಅಪಾರವಿದೆ. ಮುಖ್ಯವಾಗಿ ಕನ್ನಡ-ತೆಲುಗಿನ ಪರಸ್ಪರ ಕೊಡುಕೊಳ್ಳುವಿಕೆ, ಸಹಸಂಬಂಧಕ್ಕೆ ಅವರ ನೋಟ ಬಹಳ ಅಪ್ಯಾಯಮಾನವಾದ ವಾತಾವರಣವನ್ನು ಸಾಹಿತ್ಯಲೋಕದಲ್ಲಿ ಕೊಟ್ಟಿದೆ. ನೃತ್ಯಸಂಶೋಧನಾ ವಿಚಾರಸಂಕಿರಣದ ಅಧ್ಯಕ್ಷತೆಯ ವೇಳೆ ವಿದ್ವಾಂಸರಾದ ಡಾ.ಪಿ.ಎಸ್.ಅಪ್ಪಾರಾಯರ ತೆಲುಗು ನಾಟ್ಯಶಾಸ್ತ್ರವನ್ನು ಕನ್ನಡಕ್ಕೆ ತರುವ ಯೋಜನೆಯನ್ನು ಹಾಕಿಕೊಂಡಿದ್ದರು. ಕಾರಣಾಂತರಗಳಿಂದ ಅದು ಲಂಬಿಸಿದೆ. ಆದರೇನಾಯಿತು, ಇದೀಗ ಅದರ ಕೊರತೆಯನ್ನು ತುಂಬುವಂತೆ ಜಾಯಪಸೇನಾಪತಿಯ ಅನರ್ಘ್ಯ ನೃತ್ಯಲಕ್ಷಣರತ್ನವನ್ನು ಕನ್ನಡಕ್ಕೆ ತರಲು ಅವರೇ ಸ್ವಯಂಪ್ರೇರಿತರಾಗಿ ಬಂದಿದ್ದಾರೆ. ಇದು ನಮ್ಮ ಭಾಗ್ಯವಲ್ಲದೇ ಮತ್ತೇನು?ಈ ಯೋಜನೆ ಕೈಗೂಡುವಲ್ಲಿ ಸೋಶಿಯಲ್ ಮೀಡಿಯಾದ ನೆರವಿದೆ. ನೂಪುರ ಭ್ರಮರಿಯ ಬಳಗದ ವಾಟ್ಸಾಪ್ ಗ್ರೂಪ್ ‘ಕಲಾಕೀಲಕ’ದ ಸದಸ್ಯರೂ ಆಗಿರುವ ಡಾ ಶೇಷ ಶಾಸ್ತ್ರಿ ಅವರು, ಒಮ್ಮೆ ಬಳಗದಲ್ಲಿ ಚರ್ಚೆಗೆ ಬಂದ ನೃತ್ತ ರತ್ನಾವಳಿಯ ವಿಚಾರವನ್ನು ವಿಸ್ತರಿಸಲು ತಮಗೆ ತಾವೇ ಬದ್ಧವಾದುದ್ದರ ಫಲವೇ ಈ ಅಂಕಣ. ತೆಲುಗಿನಲ್ಲಿ ರಾಳ್ಲಪಲ್ಲಿ ಅನಂತಕೃಷ್ಣ ಶರ್ಮರು ಸಂಪಾದಿಸಿ ಜಾಯಪಸೇನಾಪತಿಯ ನೃತ್ತರತ್ನಾವಳಿಯನ್ನು ಯಥಾವತ್ತಾಗಿ ಕನ್ನಡಕ್ಕೆ ತರುವ ಮಹತ್ಕಾರ್ಯವಿದು. ಇದರಿಂದ ಪ್ರಕೃತ ಭವಿಷ್ಯದಲ್ಲಿ ಹಲವಾರು ನೃತ್ಯಾಭ್ಯಾಸಿಗಳಿಗೆ, ಸಂಶೋಧನಾರ್ಥಿಗಳಿಗೆ ಬಹುಮುಖದ ಉಪಯೋಗ ಖಂಡಿತಾ ದೊರೆಯಲಿದೆ.‘ಕನ್ನಡಕ್ಕೆ ಭಾಷಾನುವಾದ ಮಾಡುವುದಷ್ಟೇ ನನ್ನ ಕೆಲಸ, ಅದರ ಸಂಪೂರ್ಣ ಕ್ರೆಡಿಟ್ ರಾಳ್ಲಪಲ್ಲಿಯವರಿಗೇ ಸಲ್ಲಬೇಕಾದದ್ದು ’ ಎಂಬುದನ್ನು ಪದೇ ಪದೇ ನೆನಪಿಸುತ್ತಲೇ ಇರುವ ಶೇಷ ಶಾಸ್ತ್ರಿ ಅವರದ್ದು ‘ವಿದ್ಯೆಗೆ ವಿನಯವೇ ಭೂಷಣ’ ಎಂಬ ಗುಣಶ್ರೀ. ಅಲ್ಲಲ್ಲಿ ಘಟಿಸಬಹುದಾದ ಭಾಷಾಂತರ ಲೋಪವೋ ಅಥವೋ ಕೈಬರೆವಣಿಗೆಯಲ್ಲಾಗಬಹುದಾದ ದೋಷಗಳನ್ನು ಸಾವರಿಸುವ ಸ್ವಾತಂತ್ರ್ಯವನ್ನೂ ಬಹುಪ್ರೀತಿಯಿಂದ ಕೊಟ್ಟಿದ್ದು; ಆ ಫಲವಾಗಿ ತಿದ್ದುಪಡಿಗಳನ್ನು ಮಾಡಬಹುದಾದ, ಟಿಪ್ಪಣಿಗಳನ್ನೋ, ಸುಧಾರಿತ ನೃತ್ಯಭಾಷೆಯನ್ನೋ ಸೇರಿಸಬಹುದಾದ ಅವಕಾಶವೂ ಇಲ್ಲಿ ದೊರೆತಿದೆ. ಆ ಮಟ್ಟಿಗಿನ ವಿಶ್ವಾಸವನ್ನು ಹೊಂದಿದ್ದೇವೆಂಬುದು ನಮ್ಮ ಭಾಗ್ಯವೇ ಸರಿ. ಈ ಕಾರ್ಯಕ್ಕೆ ಡಾ. ಶೇಷ ಶಾಸ್ತ್ರಿ ಮತ್ತು ನೂಪುರ ಭ್ರಮರಿಯ ಸಮಾನಶೀಲರು ಜೊತೆಗೂಡಿದ್ದಾರೆ. ಅವರಿಗೂ ಕೃತಜ್ಞತೆಗಳು. ಅಂಕಣದ ಮೊದಲನೇಯ ಭಾಗದಲ್ಲಿ ರಾಳ್ಲಪಲ್ಲಿ ಶರ್ಮರು ಬರೆದ ಉಪೋದ್ಘಾತ ಮತ್ತು ಅದನ್ನನುಸರಿಸಿದ ನೃತ್ತರತ್ನಾವಳಿಯ ನಾಂದಿಶ್ಲೋಕಗಳು ಇವೆ.    ಈ ಸಲದಿಂದ ಪಾರಿಭಾಷಿಕ ಪದಗಳ ಅರ್ಥವನ್ನೂ ವಿಶೇಷವಾಗಿ ನೀಡಲಾಗುತ್ತಿದೆ. ಪಾರಿಭಾಷಿಕಾರ್ಥಗಳ ಸಂಚಯನವನ್ನು ವಿಶೇಷವಾಗಿ ಒದಗಿಸಿದವರು ವಿದುಷಿ ಕಾಂಚನಾ ರೋಹಿಣೀ ಸುಬ್ಬರತ್ನಂ ಅವರು.  - ಸಂಪಾದಕಿ

ನೃತ್ಯಪ್ರಕಾರ — ಜಕ್ಕಡೀ

16ನೆಯ ಶತಮಾನದಲ್ಲಿ ಕನ್ನಡಿಗನಾಗಿದ್ದ ಶ್ರೀಮದ್ ಪಂಡರೀಕ ವಿಠ್ಠಲನು ಇಂದು ಕರ್ಣಾಟಕ ಸಂಗೀತವೆಂದು ಪ್ರಸಿದ್ಧವಾದ ರಾಗಗಳಿಗಾಗಿ 'ಸದ್ರಾಗಚಂದ್ರೋದಯ'ವನ್ನೂ, ಇಂದು ಹಿಂದೂಸ್ಥಾನೀ ಸಂಗೀತವೆಂದು ಪ್ರಸಿದ್ಧವಾಗಿರುವ ರಾಗಗಳನ್ನು ವಿವರಿಸುವ ಗ್ರಂಥಗಳಾದ 'ರಾಗಮಂಜರೀ' - 'ರಾಗಮಾಲಾ'ಗಳನ್ನೂ, ನೃತ್ಯ ಪ್ರಪಂಚಕ್ಕಾಗಿ 'ನರ್ತನನಿರ್ಣಯ'ವನ್ನೂ ರಚಿಸಿದ್ದಾನೆ. ನರ್ತನನಿರ್ಣಯವನ್ನು ನರ್ತಕನಿರ್ಣಯವೆಂದೂ ಕರೆದಿದ್ದಾನೆ. ನರ್ತನನಿರ್ಣಯದಲ್ಲಿ ನಾಲ್ಕು ಪ್ರಕರಣಗಳಲ್ಲಿ ನರ್ತನದಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ತಾಲಧಾರಿ (ನಟ್ಟುವಾಂಗ), ಮೃದಂಗೀ, ಗಾಯಕ ಮತ್ತು ನರ್ತಕರುಗಳಿಗೆ ಅವಶ್ಯಕವಾದ ವಿಷಯಗಳನ್ನು ಬೋಧಿಸಲಾಗಿದೆ. ಬಿಕಾನೀರಿನ ಮಹಾರಾಜ ಸಂಸ್ಕೃತ ಹಸ್ತಪ್ರತಿಗಳ ಭಂಡಾರದಲ್ಲಿ ಎರಡನೆಯ ಆಕರದಲ್ಲಿರುವ 65ನೆಯ ಸಂಖ್ಯೆಯ ಹಸ್ತಪ್ರತಿಯು ಸಮಗ್ರವಾಗಿದ್ದು ಮೇಲಿನ ನಾಲ್ಕು ಪ್ರಕರಣಗಳೇ ಅಲ್ಲದೆ "ನಾಟಕ ಪ್ರಕರಣ"ವೆಂಬ ಐದನೆಯ ಪ್ರಕರಣವನ್ನೂ ಒಳಗೊಂಡಿದ್ದು ತಮ್ಮ ಗ್ರಂಥ ಸಂಪಾದನೆಯಲ್ಲಿ ಬಳಸಿಕೊಳ್ಳಲೆಂದು— "ನರ್ತನನಿರ್ಣಯದ ಈ ಬಿಕಾನೀರ್ ಮಾತೃಕೆಯನ್ನು ಪ್ರತಿಮಾಡಿಸಿಕೊಳ್ಳಲು ಎಷ್ಟೇ ಪ್ರಯತ್ನಪಟ್ಟರೂ ನಾನು ವಿಫಲನಾಗಿದ್ದೇನೆ. ಇವು ದೊರೆತಿದ್ದರೆ ಐದನೆಯ ಪ್ರಕರಣವನ್ನು ಪ್ರಕಟಿಸುವುದಷ್ಟೇ ಅಲ್ಲದೆ ನರ್ತಕ ಪ್ರಕರಣದ ಕೊನೆಯ ಭಾಗದಲ್ಲಿರುವ ಒಂದೆರಡು ಲೋಪದೋಷಗಳನ್ನು ತುಂಬಲೂ, ಮಸುಕಾಗಿರುವ ಒಂದೆರಡು ಪಾಠಗಳನ್ನು ಶೋಧಿಸಲೂ ನೆರವಾಗುತ್ತಿತ್ತು", ಎಂದು ಪಂಡರೀಕ ವಿಠ್ಠಲನ ಮೇಲೆ ಹೇಳಿದ ನಾಲ್ಕೂ ಗ್ರಂಥಗಳನ್ನು ಒಂದೆಡೆಯೇ ಸಂಪಾದಿಸಿ ವಿಮರ್ಶೆ, ವ್ಯಾಖ್ಯಾನ, ಟಿಪ್ಪಣಿ ಇತ್ಯಾದಿಗಳನ್ನು ಸಮಗ್ರವಾಗಿ ಬರೆದಂತಹ ತಮ್ಮ 'ಪುಂಡರೀಕಮಾಲಾ' ಗ್ರಂಥದಲ್ಲಿ ಮಹಾಮಹೋಪಾಧ್ಯಾಯ ಡಾ. ರಾ. ಸತ್ಯನಾರಾಯಣರವರು ಬರೆದಿದ್ದಾರೆ. ಈ 'ನಾಟಕ ಪ್ರಕರಣ' ವು ದೊರೆತು ವಿದ್ವಾಂಸರಾದ ಯಾರಾದರೂ ಸಂಪಾದಿಸಿ ಪ್ರಕಟಿಸಿದಲ್ಲಿ ರಂಗಪ್ರಪಂಚಕ್ಕೊಂದು ಮಹತ್ವದ ಕೊಡುಗೆಯಾದೀತು.

Padavarna- A study into the aesthetics of presentation in the contemporary times

PadavarNa is considered to be the highlight of the repertoire of the South Indian Classical dance form BharatanaaTyam. In the contemporary period, the presentation technique seems to be inadequate, monotonous and somewhere deficient of the necessary aesthetic equipment. The present research paper aims to probe into the essential characteristics in pada varNa which have been transmitted through oral tradition through Guru-Shishya parampara from the Sadir technique of the Maratta period to todays BharatanaaTyam. The researcher through this paper aspires to probe into the history, structure and its aesthetics especially as presented in the contemporary period in the solo form. This research work is sprung out as a result of the researchers introspective process. This research would specially benefit the dancers and the dance teachers to take up choreographing padavarNa from an aesthetic angle as it mirrors the guNaas (qualities) and the doshaas (blemishes). The present research paper, puts the structure to the test on the basis of these aesthetic scientific principles and approaches the subject in a pure analytical method. It also applies the practical method to the structure to measure for its aesthetics as the researcher has also experimented with change in formatting the presentation based on the theme. This research has also observed and recorded the changes attempted by other artistes.