ಅಭಿಜಾತ ನೃತ್ಯಗಳ ಸಹೋದ್ಯೋಗದಲ್ಲಿ ಯಕ್ಷಗಾನದ ಪಾತ್ರ ಎಷ್ಟು, ಕೊಡು-ಕೊಳ್ಳುವಿಕೆಗಳನ್ನು ಹೇಗೆ ಗಮನಿಸಿಕೊಳ್ಳಬೇಕು, ಎಂಬುದರ ಬಗ್ಗೆ ನೃತ್ತ-ನೃತ್ಯ-ನಾಟ್ಯದ ವಿವೇಚನೆಯ ಕುರಿತ ತತ್ತ್ವಪ್ರಬೋಧಕ ವಿದ್ವತ್ಪೂರ್ಣ ಲೇಖನ- ಬಹುಶ್ರುತ ವಿದ್ವಾಂಸರಾದ ಶತಾವಧಾನಿ ಡಾ.ಆರ್.ಗಣೇಶರಿಂದ.
ಇದರ ವಿವೇಚನೆಯು ನೂಪುರ ಭ್ರಮರಿ ಮತ್ತು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯು ಡಿಸೆಂಬರ್ 15, 2019 ರಂದು ಆಯೋಜಿಸಿದ ಒಂದು ದಿನದ ರಾಜ್ಯಮಟ್ಟದ ಭಾರತೀಯ ರಂಗಭೂಮಿ, ಯಕ್ಷಗಾನ ಹಾಗೂ ಭರತನೃತ್ಯಾದಿ ಕಲೆಗಳಿಗಿರುವ ಸಂಬಂಧ ಮತ್ತು ಸಮನ್ವಯ ವಿಚಾರ ಸಂಕಿರಣದಲ್ಲಿ ಪ್ರಾತ್ಯಕ್ಷಿಕೆಯ ಸಮೇತ ಮಂಡಿಸಲ್ಪಟ್ಟಿದೆ.
ಅದರ ವರದಿಗೆ ಗಮನಿಸಿ : http://www.noopurabhramari.com/yakshagana-and-bharatanritya-confluence-seminar-review/
http://www.noopurabhramari.com/narayanasmarana-and-seminar-on-yakshagana-bharatanritya-confluence-with-yakshabhanika/
by
Shatavadhani Dr R Ganesh
: Category :
Scholar Articles
: 30 Jan 2020 Issue No.: 1-4 Volume No.: 14
ವಿದುಷಿ ರೋಹಿಣಿ ಸುಬ್ಬರತ್ನಂ ನಾಡಿನ ಸುವಿಖ್ಯಾತ ವಿದ್ವಾಂಸರಾದ ಮಹಾಮಹೋಪಾಧ್ಯಾಯ ಡಾ. ರಾ. ಸತ್ಯನಾರಾಯಣ ಅವರ ಸುಪುತ್ರಿ. ಉಪ್ಪಿನಂಗಡಿಯ ಕಾಂಚನ ಎಂಬ ಊರನ್ನು ಸಂಗೀತ ವಿಶ್ವವಿದ್ಯಾಲಯವಾಗಿ ಪರಿವರ್ತಿಸಿ ಗ್ರಾಮಕ್ಕೆ ಕಲೆಯ ಸಂಸರ್ಗದ ಮೂಲಕ ಮನ್ನಣೆ ತಂದುಕೊಟ್ಟ ಕಾಂಚನ ಸುಬ್ಬರತ್ನಂ ಅವರ ಪತ್ನಿ. ಅವರ ಮೂವರು ಸುಪುತ್ರಿಯರು ಶ್ರೀರಂಜಿನಿ, ಶ್ರುತಿರಂಜಿನಿ, ಸುಮನಸರಂಜಿನಿ ಸಂಗೀತಕಲಾವಿದರು. ನಾಡಿನ ಆಢ್ಯ ಸಂಗೀತ ಮನೆತನ ರೋಹಿಣಿಯಮ್ಮನವರದ್ದು. ನೂಪುರ ಭ್ರಮರಿಯ ಆತ್ಮೀಯ ಬಳಗದವರಲ್ಲೊಬ್ಬರಾಗಿ ನಮ್ಮನ್ನು ಮುನ್ನಡೆಸುತ್ತಿರುವ ವಯೋವೃದ್ಧೆ, ಜ್ಞಾನವೃದ್ಧೆ ನಮ್ಮ ರೋಹಿಣಿಯಮ್ಮ. ಈಗಾಗಲೇ ವಾಟ್ಸಾಪ್ ಗುಂಪುಗಳಲ್ಲಿ ಅವರೀಯುತ್ತಿರುವ ಅನೇಕ ಕಲಾವಿಶೇಷ ವಿಚಾರಗಳು ಬಹುಮನ್ನಣೆಯನ್ನು ಪಡೆದಿವೆ. ಸಮಯದ ಅಭಾವದ ಜಂಜಾಟಗಳಲ್ಲಿ ಓದಿಗೆ ನಿಲುಕದೆಯೇ ಗ್ರಂಥಸ್ಥವಾಗಿ ಉಳಿದುಹೋಗುವ ಮತ್ತು ಸಮಕಾಲೀನ ಕಲಾಪರಂಪರೆಯನ್ನು ಪರಿಣಾಮಕಾರಿಯಾಗಿ ಅರಿಯುವ ನಿಟ್ಟಿನಲ್ಲಿ ಅವಶ್ಯವಿರುವ ಅನೇಕ ಕುತೂಹಲಕಾರಿ ವಿಚಾರಗಳನ್ನು ಗ್ರಂಥಗಳಿಂದ ಆರಿಸಿ ಸುಲಭವಾಗಿ ತಲುಪುವಂತೆ ನೀಡುವ ಅವರ ಕಳಕಳಿ, ಪ್ರಯತ್ನ ಸ್ತುತ್ಯರ್ಹ. ಅವರನ್ನು ನೂಪುರದ ಅಂಗಳಕ್ಕೆಳೆಯುವುದರಿಂದ ನಮಗಾಗುವ ಅರಿವಿನ ಲಾಭ ಅನೇಕ. ಕಳೆದ 5 ಸಂಚಿಕೆಗಳಿಂದಲೂ ‘ಭರತಕೌತುಕ’ ಎಂಬ ಅಂಕಣದ ಮೂಲಕ ಪ್ರಾಚೀನ ಕಲಾವಿಷಯಗಳ ಕೌತುಕವನ್ನು ದರ್ಶನ ಮಾಡಿಸುತ್ತಿದ್ದಾರೆ.
ಈ ಸಲದ ಸಂಚಿಕೆಯ ಭರತ ಕೌತುಕ- ವಿದುಷಿ ಕಾಂಚನ ರೋಹಿಣಿ ಸುಬ್ಬರತ್ನಂ ಅವರ ಅಂಕಣದಲ್ಲಿ ಅವಧಾನ ಪಲ್ಲವಿ – ತಾಳಾವಧಾನ ಎಂಬ ವಿಶಿಷ್ಟ, ಸವಾಲಿನ ತಾಳ ಕಲೆ ಯ ಬಗ್ಗೆ ಸವಿವರವಾದ ಶೋಧಲೇಖನವನ್ನೇ ಬರೆದಿದ್ದಾರೆ.
by
Rohini Subbarathnam Kanchana
: Category :
Scholar Articles
: 20 Jan 2020 Issue No.: 1 Volume No.: 14
This scholarly, exhaustive article (23 Pages) written for the sake of understanding the Avadhanam- A rare-genius performing literary art, Hight of Extempore poetry. In this article every elements of Avadhanam has been discussed in detail with examples. It also explains the skills and contributions of Shatavadhani Dr R Ganesh who has taken this art form to the greater extent in Karnataka and also the field of Avadhanam.
by
Ranganath Prasad
: Category :
Scholar Articles
: 02 Jan 2020 Issue No.: 1 Volume No.: 14
ವಿದುಷಿ ರೋಹಿಣಿ ಸುಬ್ಬರತ್ನಂ ನಾಡಿನ ಸುವಿಖ್ಯಾತ ವಿದ್ವಾಂಸರಾದ ಮಹಾಮಹೋಪಾಧ್ಯಾಯ ಡಾ. ರಾ. ಸತ್ಯನಾರಾಯಣ ಅವರ ಸುಪುತ್ರಿ. ಉಪ್ಪಿನಂಗಡಿಯ ಕಾಂಚನ ಎಂಬ ಊರನ್ನು ಸಂಗೀತ ವಿಶ್ವವಿದ್ಯಾಲಯವಾಗಿ ಪರಿವರ್ತಿಸಿ ಗ್ರಾಮಕ್ಕೆ ಕಲೆಯ ಸಂಸರ್ಗದ ಮೂಲಕ ಮನ್ನಣೆ ತಂದುಕೊಟ್ಟ ಕಾಂಚನ ಸುಬ್ಬರತ್ನಂ ಅವರ ಪತ್ನಿ. ಅವರ ಮೂವರು ಸುಪುತ್ರಿಯರು ಶ್ರೀರಂಜಿನಿ, ಶ್ರುತಿರಂಜಿನಿ, ಸುಮನಸರಂಜಿನಿ ಸಂಗೀತಕಲಾವಿದರು. ನಾಡಿನ ಆಢ್ಯ ಸಂಗೀತ ಮನೆತನ ರೋಹಿಣಿಯಮ್ಮನವರದ್ದು.
ನೂಪುರ ಭ್ರಮರಿಯ ಆತ್ಮೀಯ ಬಳಗದವರಲ್ಲೊಬ್ಬರಾಗಿ ನಮ್ಮನ್ನು ಮುನ್ನಡೆಸುತ್ತಿರುವ ವಯೋವೃದ್ಧೆ, ಜ್ಞಾನವೃದ್ಧೆ ನಮ್ಮ ರೋಹಿಣಿಯಮ್ಮ. ಈಗಾಗಲೇ ವಾಟ್ಸಾಪ್ ಗುಂಪುಗಳಲ್ಲಿ ಅವರೀಯುತ್ತಿರುವ ಅನೇಕ ಕಲಾವಿಶೇಷ ವಿಚಾರಗಳು ಬಹುಮನ್ನಣೆಯನ್ನು ಪಡೆದಿವೆ. ಸಮಯದ ಅಭಾವದ ಜಂಜಾಟಗಳಲ್ಲಿ ಓದಿಗೆ ನಿಲುಕದೆಯೇ ಗ್ರಂಥಸ್ಥವಾಗಿ ಉಳಿದುಹೋಗುವ ಮತ್ತು ಸಮಕಾಲೀನ ಕಲಾಪರಂಪರೆಯನ್ನು ಪರಿಣಾಮಕಾರಿಯಾಗಿ ಅರಿಯುವ ನಿಟ್ಟಿನಲ್ಲಿ ಅವಶ್ಯವಿರುವ ಅನೇಕ ಕುತೂಹಲಕಾರಿ ವಿಚಾರಗಳನ್ನು ಗ್ರಂಥಗಳಿಂದ ಆರಿಸಿ ಸುಲಭವಾಗಿ ತಲುಪುವಂತೆ ನೀಡುವ ಅವರ ಕಳಕಳಿ, ಪ್ರಯತ್ನ ಸ್ತುತ್ಯರ್ಹ. ಅವರನ್ನು ನೂಪುರದ ಅಂಗಳಕ್ಕೆಳೆಯುವುದರಿಂದ ನಮಗಾಗುವ ಅರಿವಿನ ಲಾಭ ಅನೇಕ. ಕಳೆದ 4 ಸಂಚಿಕೆಗಳಿಂದಲೂ ‘ಭರತಕೌತುಕ’ ಎಂಬ ಅಂಕಣದ ಮೂಲಕ ಪ್ರಾಚೀನ ಕಲಾವಿಷಯಗಳ ಕೌತುಕವನ್ನು ದರ್ಶನ ಮಾಡಿಸುತ್ತಿದ್ದಾರೆ.
ಪ್ರಸ್ತುತ ಈ ಸಂಚಿಕೆಯಲ್ಲಿ ಲೇಖಿಕೆಯವರು ಭಾರತದಲ್ಲಿ ಅಸಂಖ್ಯಾತವಾಗಿ ದೇಶೀಯವಾಗಿ ಹಬ್ಬಿರುವ ರಾಸ-ಹಲ್ಲೀಸಕ ಮತ್ತು ಚರ್ಚರೀ ನೃತ್ಯಗಳ ಇತಿಹಾಸ, ತಾಲವಿಧ, ನೃತ್ಯಕ್ರಮ, ಪ್ರಬಂಧಕ್ರಮಗಳ ಕುರಿತು ಸೋದಾಹರಣವಾಗಿ ೨೪ ಫುಲ್ ಸ್ಕೇಪ್ ಪುಟಗಳ ದೀರ್ಘ ಸಂಶೋಧನ ಲೇಖನ ಬರೆದಿದ್ದಾರೆ. ಅಧ್ಯಯನಾರ್ಥಿಗಳು ಸದುಪಯೋಗಪಡಿಸಿಕೊಳ್ಳಿರೆಂದು ಪ್ರಾರ್ಥನೆ.
by
Rohini Subbarathnam Kanchana
: Category :
Scholar Articles
: 08 Nov 2019 Issue No.: 6 Volume No.: 13
ಭಾರತದಾದ್ಯಂತ ಕಂಡುಬರುವ ಮಯೂರ ನೃತ್ಯ (ನವಿಲಿನ ನೃತ್ಯ)ದ ಸಾಧ್ಯತೆ, ಸಾಧನೆ, ವೈವಿಧ್ಯ, ವಿಶಿಷ್ಟ್ಯಗಳ ಕುರಿತಂತೆ ಭರತ ಕೌತುಕ ಅಂಕಣಕ್ಕೆ ಬರೆದ ಶೋಧ ಲೇಖನವಿದು.
by
Rohini Subbarathnam Kanchana
: Category :
Scholar Articles
: 30 Jun 2019 Issue No.: 4 Volume No.: 13