All Journals

ಮಹಾನಟನಿಗೆ ಕಾವ್ಯನೃತ್ಯೋಪಚಾರ- ಆಲಯವಿಶೇಷತೆಯ ನರ್ತನಕ್ಕೊಂದು ಸೇರ್ಪಡೆ

ದೇವಾಲಯ ಶಿಲ್ಪಗಳಲ್ಲಿ ನಾಟ್ಯಾಯಮಾನತೆ - ಸಂಶೋಧನ ಲೇಖನದ ೫ನೇಯ ಭಾಗವಿದು.ಪ್ರಕೃತ ಲೇಖನದ ಪ್ರಧಾನ ಆಶಯವನ್ನು ಪೋಷಿಸುವಂತೆ ಶಿಲ್ಪಸಾಮ್ರಾಜ್ಯದಮುಖ್ಯವಾಹಿನಿಯಲ್ಲಿ ಬೆಳಗಿಯೂ ಮರೆಯಲ್ಲಿರುವ ಕರ್ನಾಟಕದ ಒಂದು ಉತ್ಕೃಷ್ಟ ಶಿಲ್ಪಕ್ಕೆ ನೃತ್ಯಕಾವ್ಯವೊಂದನ್ನು ರಚಿಸುವ ಪ್ರಯತ್ನ ಲೇಖಿಕೆಯದ್ದು. ಕವಿಮಹಾಶಯರು ಇಂತಹ ಹಲವು ಪ್ರಯತ್ನಗಳಲ್ಲಿ ಪಾಲ್ಗೊಂಡು ನೃತ್ಯಕ್ಕೆ ಅನುಕೂಲವಾದ ಕಾವ್ಯಗಳನ್ನುರಚಿಸಬಹುದು.

ನೃತ್ಯಪ್ರಕಾರ — ಜಕ್ಕಡೀ

16ನೆಯ ಶತಮಾನದಲ್ಲಿ ಕನ್ನಡಿಗನಾಗಿದ್ದ ಶ್ರೀಮದ್ ಪಂಡರೀಕ ವಿಠ್ಠಲನು ಇಂದು ಕರ್ಣಾಟಕ ಸಂಗೀತವೆಂದು ಪ್ರಸಿದ್ಧವಾದ ರಾಗಗಳಿಗಾಗಿ 'ಸದ್ರಾಗಚಂದ್ರೋದಯ'ವನ್ನೂ, ಇಂದು ಹಿಂದೂಸ್ಥಾನೀ ಸಂಗೀತವೆಂದು ಪ್ರಸಿದ್ಧವಾಗಿರುವ ರಾಗಗಳನ್ನು ವಿವರಿಸುವ ಗ್ರಂಥಗಳಾದ 'ರಾಗಮಂಜರೀ' - 'ರಾಗಮಾಲಾ'ಗಳನ್ನೂ, ನೃತ್ಯ ಪ್ರಪಂಚಕ್ಕಾಗಿ 'ನರ್ತನನಿರ್ಣಯ'ವನ್ನೂ ರಚಿಸಿದ್ದಾನೆ. ನರ್ತನನಿರ್ಣಯವನ್ನು ನರ್ತಕನಿರ್ಣಯವೆಂದೂ ಕರೆದಿದ್ದಾನೆ. ನರ್ತನನಿರ್ಣಯದಲ್ಲಿ ನಾಲ್ಕು ಪ್ರಕರಣಗಳಲ್ಲಿ ನರ್ತನದಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ತಾಲಧಾರಿ (ನಟ್ಟುವಾಂಗ), ಮೃದಂಗೀ, ಗಾಯಕ ಮತ್ತು ನರ್ತಕರುಗಳಿಗೆ ಅವಶ್ಯಕವಾದ ವಿಷಯಗಳನ್ನು ಬೋಧಿಸಲಾಗಿದೆ. ಬಿಕಾನೀರಿನ ಮಹಾರಾಜ ಸಂಸ್ಕೃತ ಹಸ್ತಪ್ರತಿಗಳ ಭಂಡಾರದಲ್ಲಿ ಎರಡನೆಯ ಆಕರದಲ್ಲಿರುವ 65ನೆಯ ಸಂಖ್ಯೆಯ ಹಸ್ತಪ್ರತಿಯು ಸಮಗ್ರವಾಗಿದ್ದು ಮೇಲಿನ ನಾಲ್ಕು ಪ್ರಕರಣಗಳೇ ಅಲ್ಲದೆ "ನಾಟಕ ಪ್ರಕರಣ"ವೆಂಬ ಐದನೆಯ ಪ್ರಕರಣವನ್ನೂ ಒಳಗೊಂಡಿದ್ದು ತಮ್ಮ ಗ್ರಂಥ ಸಂಪಾದನೆಯಲ್ಲಿ ಬಳಸಿಕೊಳ್ಳಲೆಂದು— "ನರ್ತನನಿರ್ಣಯದ ಈ ಬಿಕಾನೀರ್ ಮಾತೃಕೆಯನ್ನು ಪ್ರತಿಮಾಡಿಸಿಕೊಳ್ಳಲು ಎಷ್ಟೇ ಪ್ರಯತ್ನಪಟ್ಟರೂ ನಾನು ವಿಫಲನಾಗಿದ್ದೇನೆ. ಇವು ದೊರೆತಿದ್ದರೆ ಐದನೆಯ ಪ್ರಕರಣವನ್ನು ಪ್ರಕಟಿಸುವುದಷ್ಟೇ ಅಲ್ಲದೆ ನರ್ತಕ ಪ್ರಕರಣದ ಕೊನೆಯ ಭಾಗದಲ್ಲಿರುವ ಒಂದೆರಡು ಲೋಪದೋಷಗಳನ್ನು ತುಂಬಲೂ, ಮಸುಕಾಗಿರುವ ಒಂದೆರಡು ಪಾಠಗಳನ್ನು ಶೋಧಿಸಲೂ ನೆರವಾಗುತ್ತಿತ್ತು", ಎಂದು ಪಂಡರೀಕ ವಿಠ್ಠಲನ ಮೇಲೆ ಹೇಳಿದ ನಾಲ್ಕೂ ಗ್ರಂಥಗಳನ್ನು ಒಂದೆಡೆಯೇ ಸಂಪಾದಿಸಿ ವಿಮರ್ಶೆ, ವ್ಯಾಖ್ಯಾನ, ಟಿಪ್ಪಣಿ ಇತ್ಯಾದಿಗಳನ್ನು ಸಮಗ್ರವಾಗಿ ಬರೆದಂತಹ ತಮ್ಮ 'ಪುಂಡರೀಕಮಾಲಾ' ಗ್ರಂಥದಲ್ಲಿ ಮಹಾಮಹೋಪಾಧ್ಯಾಯ ಡಾ. ರಾ. ಸತ್ಯನಾರಾಯಣರವರು ಬರೆದಿದ್ದಾರೆ. ಈ 'ನಾಟಕ ಪ್ರಕರಣ' ವು ದೊರೆತು ವಿದ್ವಾಂಸರಾದ ಯಾರಾದರೂ ಸಂಪಾದಿಸಿ ಪ್ರಕಟಿಸಿದಲ್ಲಿ ರಂಗಪ್ರಪಂಚಕ್ಕೊಂದು ಮಹತ್ವದ ಕೊಡುಗೆಯಾದೀತು.

ಮನೋಧರ್ಮ ಮರೆಯಾಗುತ್ತಿದೆ ನೃತ್ಯಮನೆಯೊಳಗೆ

ನಾವು ಸಂಗೀತದವರು, ಹಾಡುವ ಪ್ರತೀ ಕೃತಿಗೂ ಮನೋಧರ್ಮಕ್ಕನುಗುಣವಾಗಿ ಸ್ವಂತ ಸ್ವರ-ಪ್ರಸ್ತಾರ, ತನಿ-ಆವರ್ತನಗಳನ್ನು ಹೊಸೆದು ಹಾಡಬಲ್ಲೆವು; ನುಡಿಸಬಲ್ಲೆವು. ಆದರೆ ಇದೇ ಸಾಧ್ಯತೆ ಭರತನಾಟ್ಯದಂತಹ ನೃತ್ಯಕ್ರಮದಲ್ಲೇಕಿಲ್ಲ? ಸ್ವ ಅಭ್ಯಾಸ ಮಾಡಿಕೊಳ್ಳುವುದಾದರೆ ಪರವಾಗಿಲ್ಲ. ಆದರೆ ಮಗ್ಗಿ ಉರುಹೊಡೆದಂತೆ ರಿಹರ್ಸಲ್‍ಗಳು ಮಾಡಿ, `ಫರ್ಪೆಕ್ಟ್' ಆಗಿಯೇ ರಂಗಕ್ಕೇರಬೇಕೆಂದರೆ ಅದರ ಆಯುಷ್ಯ ಎಷ್ಟು? ನೃತ್ಯಕ್ರಮಕ್ಕೆ ಪಕ್ಕವಾದ್ಯದವರ ಸಾಂಗತ್ಯದ ಹಿನ್ನೆಲೆಯಲ್ಲಿ ಒಂದಷ್ಟು ಪೂರ್ವ ತಯಾರಿಗಳಿರಬೇಕೇನೋ ನಿಜ. ಸಂಗೀತದವರಾಗಿ ನಾವೂ ಮಾಡುತ್ತೇವೆ. ಆದರೆ ಕಚೇರಿಯ ಹಂತಹಂತಕ್ಕೂ ಒಂದಿಷ್ಟು ಬದಲಾವಣೆಯಿಲ್ಲದೆ ಕಂಠಪಾಠ ಮಾಡಿಕೊಂಡು ಒಂದೇ ನೃತ್ಯವನ್ನು ಜೀವನದುದ್ದಕ್ಕೂ ಪ್ರಾಕ್ಟೀಸ್, ರಿಹರ್ಸಲ್ ಮಾಡುವುದಾದರೆ ಏನಿದೆ ಸ್ವಾರಸ್ಯ? `ಮಕ್ಕಳಿಗೆ ಸುಲಭವಾಗಬೇಕು' ಎಂಬ ಕಾರಣ ಕೊಡುವುದಾದರೆ ಯಾಕೆ ಪೂರ್ಣ ಕಲಿಯುವ ಮುಂಚೆಯೇ ರಂಗಕ್ಕೆ ಹತ್ತಿಸಬೇಕು? ಗ್ರೂಪ್‍ನಲ್ಲಿ ಮಾಡುವುದಾದರೆ ಏನೋ ಪರವಾಗಿಲ್ಲವೆನ್ನಬಹುದು. ಆದರೆ ಏಕವ್ಯಕ್ತಿಯ ನೃತ್ಯ ಪ್ರದರ್ಶನಕ್ಕೂ ಇದೇ ಜಾಯಮಾನವೆಂದರೆ ಹ್ಯಾಗೆ? ಅದಿರಲಿ, ಕಲಿಯುವಾಗ ಅಥವಾ ಕಲಿಸುವಾಗಲೂ ಶಿಕ್ಷಕರು, ಗುರುಗಳು ಇದೇ ವರ್ತನೆ ತೋರಿಸುತ್ತಾರಲ್ಲಾ! ಸಿದ್ಧ ಮಾದರಿಯ ಬೊಂಬೆಗಳನ್ನು ಮಾಡಿಡುವುದಾದರೆ ಕಲೆಗೆ ಏನು ಪ್ರಯೋಜನ? ಕೊರಿಯೋಗ್ರಫಿ ಎಂದರೆ ಇದೇನಾ? ಸಹೃದಯ ರಸಿಕನಿಗೆ ಸಿಗುವ ಕಲಾಸ್ವಾದವೇನು? ಸರಿ, ಕಲಾವಿದನಿಗೂ `ಬೋರ್' ಹೊಡೆಯುವುದಿಲ್ಲವೇ? ಅಷ್ಟಕ್ಕೂ ರಂಗದಲ್ಲೇ ಮನೋಧರ್ಮಕ್ಕನುಗುಣವಾದ ಕಲೆ ಸೃಷ್ಟಿ ಮಾಡುವ ಸಾಮಥ್ರ್ಯವಿಲ್ಲದವನು ಕಲಾವಿದ ಹೇಗಾದಾನು? ನೋಡಹೊರಟರೆ ನಮ್ಮದೂ ಶಾಸ್ತ್ರೀಯ; ನಿಮ್ಮದೂ ಶಾಸ್ತ್ರೀಯ; ಹೀಗಿದಾಗ್ಯೂ ಏಕೆ ಈ ಅಂತರ? ' ಎಂದು ಸ್ನೇಹಿತರ ಮಡದಿ ಪ್ರಶ್ನೆ ಮೇಲೆ ಪ್ರಶ್ನೆ ಮುಂದಿಟ್ಟಾಗ ಎಲ್ಲಿಲ್ಲದ ಕಸಿವಿಸಿ.

State Level Dance Research Symposium August 2018

The 10th anniversary of Noopurabharamari and the first anniversary of Kalagowri was celebrated with a state level dance research symposium on Sunday 12th August, 2018 at ‘Kalagowri auditorium’, Bangalore. The theme of the symposium was the dance ability :in theory and practice. The programme started with the invocation sung by Smt. Tejaswini Dattakumar and lighting of the lamp by scholars. Various research papers with practical dancing had been organised. Smt. Padmini A Rao, M. Phil, research scholar and director of ‘Sri Niketan’, from Bangalore presented a research paper ‘The Journey of the technique of Sthanaka according to Dance treatises’with practical demonstrations of Sthanakas of Kuchipudi, Kathak and Odissi. Following this, Dr. Dwaritha Viswanatha, Director: Nirmiti- An Abode of Arts and Culture and Resource person Kalai Kaviri college, presented a performance research paper on ‘Parakiya Nayika’ accompanied by Dr. Priyashri Rao on Vocal and Nattuvangam. 

Madhulika in Vamshi Vilasa

Krishna as a Sringara nayaka is a celebrated theme in Indian classical dance. Equally favoured is the Padavarna composition in a Bharatanatya repertoire. One of the most popular themes for this is a Virahotkanthita nayika, the one who is in distress at the absence of her beloved.