All Journals

Pushpakayaana

 This is a dance criticism (Kannada) on the Dance production -Pushpakayaana performed by 3rd semester batch students of Dance and Performance department of  Jain University.    This article not only reviews the performance but also gives the hint towards the universality and employing techniques of Ramayana in dance performance and theatre. This writing is referential material to researchers and artists, apt for scholarly discussion and also example for the usage of linguistic beauty in review and criticism too. This article consists appropriate photographs along with narration in Kannada. 

Noopura Bhramari 12th Vol

 Latest #Noopurabhramari* (12Volume-2,3,4 combined ( *February2018- July 2018*) is now available in digital format. The latest issue consist of many thought provoking articles,columns which is treasure of #scholarship and #knowledge. To name few- *Editorial on the journey with Noopura Bhramari* (Kannada) *Nudi Namana Anjali* to #SahridayaSadratna Subbukrishna Report on the #Dance #research #symposium- February 2018* *A column on #NrittaRatnavali (First ever kannada translation of #Jayapasenani #treatise) By renowned scholar *Dr Shesha shastri* *Column on #Dancelyrics with special attention to #Shabdam -#Ganapatishabdam *Column on #PerformingArtsresearch patterns by #aesthetician and #researcher Dr. Shobha Shashikumar (English)* *Research writeup on Classification, Duties of #Sakhi and her representation in #MohanaTarangini of Sri #Kanakadasaru- by Research scholar Deepthishri Bhat* (Kannada) #Bharata #Koutuka- column by Vid. Rohini subbaratnam( Kannada)*- an in detailed research article on #Jakkadi #nritya #Rangaakshara-column by Vid. Korgi Shankaranarayana Upadhyaya-On #Rupaka #performancepattern, directional views and #literature (#Kannada)*- on the concept '#Krishna Karunya' And many more writings.... Page design by : Dr Manorama B N Pages- 106

ಜಾಯಪಸೇನಾಪತಿಯ ನೃತ್ತರತ್ನಾವಳಿ- ಭಾಗ ೪

ಕರ್ನಾಟಕ ಕಾಣುತ್ತಿರುವ ಅತ್ಯುತ್ತಮ, ಹಿರಿಯ ತಲೆಮಾರಿನ ಸಂಶೋಧಕರಲ್ಲಿ ಡಾ. ಶೇಷ ಶಾಸ್ತ್ರಿ ಅವರದ್ದು ಮೇಲ್ಪಂಕ್ತಿಯಲ್ಲಿರುವ ಹೆಸರು. ಅವರ ಸಂಶೋಧನಾ ಕೃತಿ ‘ಕರ್ನಾಟಕದ ವೀರಗಲ್ಲುಗಳು’ ಶೋಧsಕ್ಷೇತ್ರಕ್ಕೆ ಮಹತ್ವದ ಸೇರ್ಪಡೆ. ಅದೂ ತನ್ನ ೩ನೇ ಆವೃತ್ತಿಯನ್ನು ಪ್ರಸಕ್ತ ಸಾಲಿನಲ್ಲಿ ಕಾಣುತ್ತಿರುವುದು ಸಂಶೋಧನಾ ಕ್ಷೇತ್ರಕ್ಕೆ ಹೆಮ್ಮೆಯ ವಿಷಯ. ಸಂಶೋಧನೆಯೊಂದು ಮರುಪ್ರಕಟಣೆಗೊಳ್ಳುವಷ್ಟು ಅರ್ಹತೆ, ಜನಾದರ ಹೊಂದಿರುವುದಾದರೆ ಹೇಗೆ ಎನ್ನುವುದಕ್ಕೆ ಅವರ ಶೋಧಲೇಖನ ಮತ್ತು ಕೃತಿಗಳೇ ಸಾಕ್ಷಿ. ನೂಪುರ ಭ್ರಮರಿ ಆಯೋಜಿಸಿದ ಕರ್ನಾಟಕ ರಾಜ್ಯಮಟ್ಟದ ನೃತ್ಯಸಂಶೋಧನಾ ವಿಚಾರಸಂಕಿರಣದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಹಲವು ನಿರ್ದೇಶನಗಳನ್ನಿತ್ತವರು ಇವರೇ- ಡಾ. ಶೇಷಶಾಸ್ತ್ರಿ. ಅವರ ಅಧ್ಯಕ್ಷೀಯ ನುಡಿಗಳು ‘ನೂಪುರಾಗಮ’ದಲ್ಲಿ ಸವಿಸ್ತಾರವಾಗಿ ದಾಖಲಾಗಿವೆ ಕೂಡಾ. ನೂಪುರ ಭ್ರಮರಿಯೊಂದಿಗಿನ ನಂಟು, ಅದರ ಸದಸ್ಯರೊಂದಿಗಿನ ಒಡನಾಟ- ಪ್ರೀತಿಗೆ ನಾವು ಅವರಿಗೆ ಸದಾಕಾಲಕ್ಕೂ ಋಣಿ. ಇನ್ನೇನು ಸದ್ಯದಲ್ಲೇ ಅವರಿಗೆ ಅಭಿನಂದನಾ ಸಮಾರಂಭವೂ ಅಭಿಮಾನಿ ಇತಿಹಾಸಕಾರರಿಂದ ನೆರವೇರಲಿಕ್ಕಿದೆ.ತೆಲುಗು ಸಾಹಿತ್ಯ-ಸಂಶೋಧನೆ- ಶಾಸನಾಧ್ಯಯನದಲ್ಲಿಯೂ ಶಾಸ್ತ್ರಿಗಳ ಕೊಡುಗೆ ಅಪಾರವಿದೆ. ಮುಖ್ಯವಾಗಿ ಕನ್ನಡ-ತೆಲುಗಿನ ಪರಸ್ಪರ ಕೊಡುಕೊಳ್ಳುವಿಕೆ, ಸಹಸಂಬಂಧಕ್ಕೆ ಅವರ ನೋಟ ಬಹಳ ಅಪ್ಯಾಯಮಾನವಾದ ವಾತಾವರಣವನ್ನು ಸಾಹಿತ್ಯಲೋಕದಲ್ಲಿ ಕೊಟ್ಟಿದೆ. ನೃತ್ಯಸಂಶೋಧನಾ ವಿಚಾರಸಂಕಿರಣದ ಅಧ್ಯಕ್ಷತೆಯ ವೇಳೆ ವಿದ್ವಾಂಸರಾದ ಡಾ.ಪಿ.ಎಸ್.ಅಪ್ಪಾರಾಯರ ತೆಲುಗು ನಾಟ್ಯಶಾಸ್ತ್ರವನ್ನು ಕನ್ನಡಕ್ಕೆ ತರುವ ಯೋಜನೆಯನ್ನು ಹಾಕಿಕೊಂಡಿದ್ದರು. ಕಾರಣಾಂತರಗಳಿಂದ ಅದು ಲಂಬಿಸಿದೆ. ಆದರೇನಾಯಿತು, ಇದೀಗ ಅದರ ಕೊರತೆಯನ್ನು ತುಂಬುವಂತೆ ಜಾಯಪಸೇನಾಪತಿಯ ಅನರ್ಘ್ಯ ನೃತ್ಯಲಕ್ಷಣರತ್ನವನ್ನು ಕನ್ನಡಕ್ಕೆ ತರಲು ಅವರೇ ಸ್ವಯಂಪ್ರೇರಿತರಾಗಿ ಬಂದಿದ್ದಾರೆ. ಇದು ನಮ್ಮ ಭಾಗ್ಯವಲ್ಲದೇ ಮತ್ತೇನು?ಈ ಯೋಜನೆ ಕೈಗೂಡುವಲ್ಲಿ ಸೋಶಿಯಲ್ ಮೀಡಿಯಾದ ನೆರವಿದೆ. ನೂಪುರ ಭ್ರಮರಿಯ ಬಳಗದ ವಾಟ್ಸಾಪ್ ಗ್ರೂಪ್ ‘ಕಲಾಕೀಲಕ’ದ ಸದಸ್ಯರೂ ಆಗಿರುವ ಡಾ ಶೇಷ ಶಾಸ್ತ್ರಿ ಅವರು, ಒಮ್ಮೆ ಬಳಗದಲ್ಲಿ ಚರ್ಚೆಗೆ ಬಂದ ನೃತ್ತ ರತ್ನಾವಳಿಯ ವಿಚಾರವನ್ನು ವಿಸ್ತರಿಸಲು ತಮಗೆ ತಾವೇ ಬದ್ಧವಾದುದ್ದರ ಫಲವೇ ಈ ಅಂಕಣ. ತೆಲುಗಿನಲ್ಲಿ ರಾಳ್ಲಪಲ್ಲಿ ಅನಂತಕೃಷ್ಣ ಶರ್ಮರು ಸಂಪಾದಿಸಿ ಜಾಯಪಸೇನಾಪತಿಯ ನೃತ್ತರತ್ನಾವಳಿಯನ್ನು ಯಥಾವತ್ತಾಗಿ ಕನ್ನಡಕ್ಕೆ ತರುವ ಮಹತ್ಕಾರ್ಯವಿದು. ಇದರಿಂದ ಪ್ರಕೃತ ಭವಿಷ್ಯದಲ್ಲಿ ಹಲವಾರು ನೃತ್ಯಾಭ್ಯಾಸಿಗಳಿಗೆ, ಸಂಶೋಧನಾರ್ಥಿಗಳಿಗೆ ಬಹುಮುಖದ ಉಪಯೋಗ ಖಂಡಿತಾ ದೊರೆಯಲಿದೆ.‘ಕನ್ನಡಕ್ಕೆ ಭಾಷಾನುವಾದ ಮಾಡುವುದಷ್ಟೇ ನನ್ನ ಕೆಲಸ, ಅದರ ಸಂಪೂರ್ಣ ಕ್ರೆಡಿಟ್ ರಾಳ್ಲಪಲ್ಲಿಯವರಿಗೇ ಸಲ್ಲಬೇಕಾದದ್ದು ’ ಎಂಬುದನ್ನು ಪದೇ ಪದೇ ನೆನಪಿಸುತ್ತಲೇ ಇರುವ ಶೇಷ ಶಾಸ್ತ್ರಿ ಅವರದ್ದು ‘ವಿದ್ಯೆಗೆ ವಿನಯವೇ ಭೂಷಣ’ ಎಂಬ ಗುಣಶ್ರೀ. ಅಲ್ಲಲ್ಲಿ ಘಟಿಸಬಹುದಾದ ಭಾಷಾಂತರ ಲೋಪವೋ ಅಥವೋ ಕೈಬರೆವಣಿಗೆಯಲ್ಲಾಗಬಹುದಾದ ದೋಷಗಳನ್ನು ಸಾವರಿಸುವ ಸ್ವಾತಂತ್ರ್ಯವನ್ನೂ ಬಹುಪ್ರೀತಿಯಿಂದ ಕೊಟ್ಟಿದ್ದು; ಆ ಫಲವಾಗಿ ತಿದ್ದುಪಡಿಗಳನ್ನು ಮಾಡಬಹುದಾದ, ಟಿಪ್ಪಣಿಗಳನ್ನೋ, ಸುಧಾರಿತ ನೃತ್ಯಭಾಷೆಯನ್ನೋ ಸೇರಿಸಬಹುದಾದ ಅವಕಾಶವೂ ಇಲ್ಲಿ ದೊರೆತಿದೆ. ಆ ಮಟ್ಟಿಗಿನ ವಿಶ್ವಾಸವನ್ನು ಹೊಂದಿದ್ದೇವೆಂಬುದು ನಮ್ಮ ಭಾಗ್ಯವೇ ಸರಿ. ಈ ಕಾರ್ಯಕ್ಕೆ ಡಾ. ಶೇಷ ಶಾಸ್ತ್ರಿ ಮತ್ತು ನೂಪುರ ಭ್ರಮರಿಯ ಸಮಾನಶೀಲರು ಜೊತೆಗೂಡಲಿದ್ದಾರೆ. ಅವರಿಗೂ ಕೃತಜ್ಞತೆಗಳು.ಅಂಕಣದ ಮೊದಲನೇಯ ಭಾಗದಲ್ಲಿ ರಾಳ್ಲಪಲ್ಲಿ ಶರ್ಮರು ಬರೆದ ಉಪೋದ್ಘಾತ ಮತ್ತು ಅದನ್ನನುಸರಿಸಿದ ನೃತ್ತರತ್ನಾವಳಿಯ ನಾಂದಿಶ್ಲೋಕಗಳು ಇವೆ. ಅಕ್ಷರಭ್ರಮರಿಯ ಈ ನುಡಿಜಾತ್ರೆ ಇನ್ನೊಂದಷ್ಟು ಸಂಚಿಕೆಗಳಲ್ಲಿ ನೃತ್ತರತ್ನಾವಳಿಗೆ ಮೀಸಲು. - ಸಂಪಾದಕಿ

ಗಣಪತಿ ಶಬ್ದ

ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಹೊರಾವರಣದಲ್ಲಿ ನರ್ತನವಾಡುವ ನಾಟ್ಯಗಣಪತಿಯಂತೂ ಮತ್ತೂ ಆಂಗಿಕ-ಸಾತ್ತ್ವಿಕ ಸಮನ್ವಿತನಾಗಿ ಭಾವವ್ಯಂಜಕ. ಗಣಪತಿಯ ಕುರಿತಂತೆ ಸಾಕಷ್ಟು ತತ್ತ್ವ ಜಿಜ್ಞಾsಸೆ, ಗೀತ-ಕಾವ್ಯ-ನೃತ್ಯಪ್ರಸಕ್ತಿಗಳೂ ಹಾಗೆಯೇ ನೃತ್ಯಗಣಪತಿಯ ಕುರಿತೂ ಐತಿಹಾಸಿಕ ವಿವರಗಳು ಇರುವುದರಿಂದ ಅವುಗಳೆಲ್ಲದರ ಬಗೆಗೆ ಮತ್ತೊಮ್ಮೆ ಇಲ್ಲಿ ದಾಖಲಿಸುವ ಗಾತ್ರಭರಿತವಾದ ಕಾರ್ಯವು ಖಂಡಿತಾ ಗಣಪತಿಯ ಹೊಟ್ಟೆಯಂತೆಯೇ ಹಿರಿದು. ಇಲ್ಲಿ ಉಲ್ಲೇಖಿಸಲೇಬೇಕಾದದ್ದೆಂದರೆ, ಶಿಲ್ಪ ಮತ್ತು ನರ್ತನವು ಪರಸ್ಪರ ಕೊಡುಕೊಳ್ಳುವಿಕೆಯ ನೆಲೆಯಲ್ಲಿ ಪಡೆಯುವ ಉಪಕಾರಗಳನ್ನು.ನೃತ್ಯಾವಹವಾಗಿ ಗಣಪತಿಯನ್ನು ಕಾಣುವುದರಲ್ಲಿಯೂ ಹೊಸತನವು ಅಪೇಕ್ಷಿತ ವಿಚಾರ. ಬಹಳಷ್ಟು ಸಲ ಪ್ರಥಮಪೂಜಿತ, ವಿಘ್ನನಿವಾರಕನೆಂದಷ್ಟೇ ಸ್ತುತಿಗೆ ಮೀಸಲಾಗಿಯೋ ಇಲ್ಲವೇ ಕೆಲವೊಂದು ಜನಪ್ರಿಯ ಕತೆಗಳನ್ನು ಸಂಚಾರಿ ಅಭಿನಯಗಳಷ್ಟಕ್ಕೇ ಅಳವಡಿಸಿಕೊಳ್ಳುವುದಕ್ಕಷ್ಟೇ ಗಣಪತಿ ಸೀಮಿತವಾಗುತ್ತಾನೆ. ಹಸ್ತಗಳಲ್ಲಾದರೋ ಕಪಿತ್ಥ ಸಂಯುತ ಹಸ್ತ (ಕುಕ್ಷಿ ವಿನ್ಯಾಸ), ಅರಾಳ ಹಸ್ತ (ಕರ್ಣಗಾತ್ರ), ಕರಿಹಸ್ತ (ಮುಕುಲ, ಅರಾಳದಿಂದ ಸೊಂಡಿಲ ಮೊಗನೆಂಬ ಸಂಕೇತ), ತಾಮ್ರಚೂಡ (ಪಾಶಾಂಕುಶಧಾರಿ), ಉನ್ಮುಖವಾದ ಊರ್ಣನಾಭ ಮತ್ತು ಅಭಯ ಪತಾಕ ಹಸ್ತ (ಮೋದಕಪ್ರಿಯ) ಮುಂತಾದವುಗಳನ್ನು ಬಳಸಿ ಅಭಂಗದಲ್ಲಿ ಪಾದವಿನ್ಯಾಸವನ್ನು ನಡೆಸುವುದಕ್ಕಷ್ಟೇ ಗಣಪತಿಯ ಆಂಗಿಕ ಮಿತಿಗೊಳ್ಳುತ್ತಿರುವುದು ಸರ್ವವೇದ್ಯ. ಹಸ್ತ-ಮುದ್ರೆಗಳಿಂದಾಚೆಗೆ ಕಲೆಯಲ್ಲಿ ಸಾಧಿಸಬಹುದಾದ ಅಂಶಗಳು ಅನೇಕವಿದೆಯೆಂಬುದು ಬಲ್ಲೆವಷ್ಟೇ. ಹಾಸಸ್ಥಾಯಿಗೂ, ಹಾಸ್ಯರಸಕ್ಕೂ ಆತನೇ ಅಧಿಪತಿ ಎಂಬಲ್ಲಿ ನರ್ತನಸಮಯದಲ್ಲ್ಲಿ ಆತನನ್ನು ಬಳಸಿಕೊಳ್ಳಬಹುದಾದ ಸೂಕ್ಷ್ಮ ಇನ್ನಷ್ಟು ಸ್ಪಷ್ಟವಾಗುತ್ತದೆ. ಕೇವಲ ಸಂಕೇತರೂಪವಷ್ಟೇ ಅಲ್ಲದೆ ನಾಟ್ಯಶಾಸ್ತ್ರೋಚಿತವಾದ ಅಂಗೋಪಾಂಗ ಪ್ರತ್ಯಂಗಸಮನ್ವಯದಲ್ಲಿ ನರ್ತನರಂಗದಲ್ಲಿ ಗಣಪತಿಯನ್ನು ಕಟೆದರೆ ಈಗಾಗಲೇ ಶಿಲ್ಪಶಾಸ್ತ್ರದಲ್ಲಿ ಕಾಣುತ್ತಿರುವ ನಾಟ್ಯಗಣಪತಿಯ ಆಂಗಿಕ-ಸಾತ್ವಿಕ ಲೀಲಾವಿಶೇಷ ಸಾಕ್ಷಾತ್ಕಾರಗೊಳ್ಳುತ್ತದೆ.